Thursday, December 10, 2015

ಮೌನ ಬಳ್ಳಿ


ನವೀನ ಸೂರ್ಯನ  ಮುಂಜಾವಿಗೆ
ಕೈದಾವರೆಗೆ ವಿಸ್ಮಯ ಕಿರುನಗೆ

ಮಾತೆಲ್ಲ ಪುಳಕಿತ ಸೃಷ್ಟಿಗೆ .
ನಸುಗೆಂಪು ಕಣ್ಣೀರು ಜಾರಿದ ಕಲಶಕೆ

ಅದೆಲ್ಲಿ  ಹುಡುಕಿತು ಸೃಷ್ಟಿ ನಿನಗೆ
ಕುಲ ಬೆಳಗುವ ಕಣ್ಣೊಟವ ..

ಅಲ್ಲೇ ಮಲಗಿದ  ನನಗೆ ..
ಮತ್ತೆಲ್ಲೋ ಕರೆದ ಜೋಂಪು ..

ನೀ ಕೈ ಇಟ್ಟ ಗಲ್ಲಕೆ ..
ಬಿಸಿ ಮುತ್ತೇ ಬೇಡ ..

ಕಣ್ಮುಚ್ಚಿ ಕೇಳಿದ ಆ ನಿನ್ನ ಸ್ವರ ..
ಅದೆಲ್ಲೋ ಕೊಳಲ ನಾದದ ಇಂಪು ..

ಮೆಲುಕು ಹಾಕಿತು ಮನ
ಮತ್ತೊಮ್ಮೆ ನಿನ್ನ ನೆನಪ ..

ಇರಬಾರದಿತ್ತೆ ನನ್ನ ಕಣ್ಣಂಚಿನಲಿ
ಆ ನಿನ್ನ ಬಿಸಿ ಸ್ಪರ್ಶ ..

ಹೃದಯಕ್ಕೆ  ಅದೆಷ್ಟು ವಿಸ್ಮಯ ..
ಆ ನಿನ್ನ ಪ್ರತೀ ಕರೆಗೆ ..

ವಿದ್ಯುತ್ ಪ್ರವಾಹ ನರ ನಾಡಿಗೆ ..
ನೀ ಕರೆದ ನಾದ ಧ್ವನಿ ಸುರುಳಿಗೆ ..

ಸೋತೆ ನಾನು ನಿನ್ನಮ್ಮಗೆ ..
ನನಗೆ ಕೊಟ್ಟ 'ನೀನೆಂಬ' ಬಹುಮಾನಕೆ!!

ಅಪ್ಪ ಎಂಬ ಆ ನಿನ್ನ ಕರೆ
ಒಳ ಅಂತರಗದ ಶುದ್ದ ಗೆರೆ..

ಅದೇನನಿಸಿತೋ ಆ ಸ್ರುಸ್ಟಿಕರ್ತನಿಗೆ
ನನಗಾಗಿ ನೀಡಲು ನಿನ್ನ ಕೆಲ ಕಾಲಕೆ ..

ಎಲ್ಲಿದ್ದರೇನು ಹೇಗಿದ್ದರೇನು
ನಂಗೆ ನೀನು ಅದೇ ಮೌನ ಬಳ್ಳಿಯ ಮಗಳೇ ..


- ಅಮರ ಕೆ ಜಿ ಕಾನುಗೋಡು