Thursday, June 9, 2011

ಬ್ರಷ್ಟಾಚಾರ ನಿರ್ಮೂಲನೆಗೆ ನನ್ನದೊಂದು ಕನಸ ಕೂಸು . . . .

ಬಹುಷಃ ಈ ಬ್ರಷ್ಟಾಚಾರ ಎನ್ನುವ ಪಿಡುಗು ಹುಟ್ಟುವದು ಮತದಾರರಿಂದ. ಮತದಾರ ಮನೆ ಬಾಗಿಲಿಗೆ ಬಂದ ಚುನಾವಣಾ ಅಭ್ಯರ್ಥಿಯಿಂದ ಕ್ಷುಲ್ಲುಕ ಹಣ ಹೆಂಡಕ್ಕಾಗಿ ಬಾಯ್ಬಿಟ್ಟು ತನ್ನ ಅತೀಅಮೂಲ್ಯವಾದ ಮತವನ್ನ ಮಾರಾಟ ಮಾಡಿಬಿಡುತ್ತಾನೆ ಅಂದು ೧೦೦ ರೂಗೆ ಬಾಯ್ಬಿಟ್ಟ ಈತ ಮುಂದೆಂದೂ ಸರಿಮಾಡಲಾಗದಂತ ಬ್ರಷ್ಟಾಚಾರದ ರೋಗವನ್ನು ಪಸರಿಸುತ್ತಾನೆ. ಹಣ ಸುರಿದು ಗೆದ್ದ ಅಬ್ಯಾರ್ಥಿಯಾದರೂ ಮನುಷ್ಯನೇ .. ಸಾಲ ಮಾಡಿ ಗೆದ್ದ ಈತನಿಗೆ ಮತದಾರರಿಂದ ದುಡ್ಡು ಪಡೆಯುವ ರೋಗ ಹರಡಿರುತ್ತದೆ .. ಈತ ಈ ರೋಗವನ್ನು ಅಧಿಕಾರಿಗಳಿಂದ ದುಡ್ಡು ಪಡೆಯುವ ಮುಖಾಂತರ ಅವರಿಗೂ ಹರಡಿಸಿಬಿಡುತ್ತಾನೆ. ಅಧಿಕಾರಿಗಳೂ ಅದನ್ನ ತನ್ನ ಕೆಳಗಿನ ಅಧಿಕಾರಿಗಳಿಗೆ ಹರಡಿಸಿ .. ಒಟ್ಟಾರೆ ಉಸಿರಾಡುವ ಎಲ್ಲ ಮನುಷ್ಯರೂ ಈ ಭಯಾನಕ ರೋಗಕ್ಕೆ ಬಲಿಯಾಗುತ್ತಾರೆ .. ಮತದಾನ ಮಾಡುವಾಗ ನಿಯತ್ತಿದ್ದರೆ ದುಡ್ಡು ಪಡೆಯುವ ಅಧಿಕಾರಿಯಿಂದ ನಿಯತ್ತನ್ನು ಬಯಸಬಹುದು ... ನಾವು ನೆಡುವ ಗಿಡ ಮಾವು ಆಗಿದ್ದರೆ ನಮಗೆ ಅದು ಮಾವಿನ ಹಣ್ಣನ್ನು ಪಡೆಯಬಹುದು ಅಲ್ಲವೇ? .
ಈ ರೋಗ ಎಷ್ಟು ಬಲಿಷ್ಟವಾಗಿ ಹರಡಿದೆಯೆಂದರೆ ಈಗ ಎಲ್ಲರ ಕೈ ಮೀರಿ ಬ್ರಷ್ಟಾಚಾರ ನರ್ತಿಸುತ್ತಿದೆ.. ಬ್ರಷ್ಟಾಚಾರದ ಶಿಶು ರೌಡಿಸಂ .. ದೌರ್ಜನ್ಯ .. ಅನೈತಿಕತೆ .. ಆತಂಕ ಇದನ್ನು ಸಹಿಸರಾರದಷ್ಟಾಗಿದೆ ...
ಬಹುಷಃ ಈ ರೋಗವನ್ನು ನಿವಾರಿಸಲು ಒಂದು ಜೆನರೇಶನ್ ಸಂಪೂರ್ಣ ನಿರ್ನಾಮವಾಗಬೇಕಿದೆ ...
ನನಗೆ ಈ ರೋಗದ ನಿವಾರಣೆಗೆ ಕೆಲವು ಯೋಚನೆಗಳು ಕೆಲವೊಮ್ಮೆ ಬರುತ್ತಿರುತ್ತದೆ .. ಈ ಬ್ಲಾಗ್ ಓದುಗರೊಂದಿಗೆ ಇದನ್ನ ಹಂಚಿಕೊಳ್ಳುವಾಸೆ
೧. ಪ್ರತಿಯೊಬ್ಬ ಪ್ರಜೆಗೂ ಫುಲ್ಲಿ ಲೋಡೆಡ್ ಗನ್ನನ್ನು ಅತೀ ಉತ್ತಮ ಡಿಸ್ಕೌಂಟ್ ನಲ್ಲಿ ಕೊಡಬೇಕು . ಆತನಿಗೆ ಯಾವಾಗಲು ಇದನ್ನು ತನ್ನೊಡನೆ ಇಟ್ಟುಕೊಳ್ಳಲು ಅವಕಾಶ ಕೊಡಬೇಕು . ಇದರಿಂದ ಪ್ರತಿಯೊಬ್ಬನಿಗೂ ಬ್ರಷ್ಟಾಚಾರದ ವಿರುದ್ದ ಮಾತಾಡಲು ಸ್ವಲ್ಪ ಧೈರ್ಯ ಬರಬಹುದು. ಚುನಾವಣ ಭಾಷಣಗಳಲ್ಲಿ ಬೊಗಳೆ ಬಿಟ್ಟರೆ ಮುಂದಿರುವ mudi ಮನುಷ್ಯ ಅವನನ್ನು ಧಂ ಅನ್ನಿಸಬಹುದು .. ತಹಶೀಲ್ದಾರ್ ಆಫೀಸ್ ನಲ್ಲಿ ಅದಿಕಾರಿ ದುಡ್ಡು ಕೇಳಿದ ನಂತರದ ಕ್ಷಣದಲ್ಲಿ ಆತ ಇಲ್ಲದಿರಬಹುದು .. ನಾವು ಮಾಡುವುದಿಲ್ಲ ಎಂದಾದರೆ ನಮ್ಮೆದುರು ರೌಡಿಸಂ. ಅದೇ ನನ್ನ ಮತ್ತು ನನ್ನ ಸುತ್ತಮುತ್ತಲೂ ಇದ್ದವರ ಬಳಿ ಲೋಡೆಡ್ ಗಂನಿದೆ ಅಂದ್ರೆ ಅದು ಸುಲಭ ಅಲ್ಲ . ಇದರಿಂದ ಅನೇಕ ಅಮಾಯಕರೂ ಕೂಡ ಸಾವನ್ನಪ್ಪಬಹುದು. ಆದರೂ ಕೂಡ ಒಂದು ಸಮಾಜವನ್ನ ಸರಿದಾರಿಗೆ ತರಲು ಕೆಲವೊಮ್ಮೆ ನಾವು ಒಳ್ಳೆಯದನ್ನು ಕಳೆದುಕೊಳ್ಳಬೇಕು . .
2 ಎರಡನೆಯದಾಗಿ ಹಣ . ಹಣ ಹರಿಯುವ ಎಲ್ಲಾ ದಾರಿಗಳು ಗೊತ್ತಾಗುತ್ತಿರಬೇಕು . ಚುನಾವಣ ಅಭ್ಯರ್ಥಿ ಮತದಾರನಿಗೆ ೧೦೦ ರೂ ಕೊಟ್ಟರೆ ಕೂಡಲೇ ಅದು ತಿಳಿಯಬೇಕು . ಅಧಿಕಾರಿ ಲಂಚ ಪಡೆದರೆ ಅದೂ ಕೂಡ ನೋಟ್ ಆಗುವಂತಿರಬೇಕು .ಇದು ಅಸಾಧ್ಯ ಎಂಬುದು ನಮ್ಮೆಲ್ಲರ ಕಲ್ಪನೆ . ಆದರೆ ಇದು ಸಾಧ್ಯ . ಈ ಪೇಪರ್ ಹಣವನ್ನ ನಿರ್ಮೂಲನೆ ಮಾಡಬೇಕು . ಎಲ್ಲ ಪೇಪರ್ ಹಣವನ್ನ ಸುಡಬೇಕು . ಈ ಎಲ್ಲ ಹಣವನ್ನ ಎಲೆಕ್ಟ್ರೋನಿಕ್ ದುದ್ದನ್ನಗಿ ಪರಿವರ್ತಿಸಬೇಕು . ಓಕೆ ಇಂದಿನಿಂದ ನಮ್ಮ ಎಲ್ಲ ಹಣದ ವ್ಯವಹಾರಗಳು ನಮ್ಮ ಕಾರ್ಡ್ ನ ಮುಖಾಂತರ ಅಥವಾ ಮೊಬೈಲ್ ಮುಖಾಂತರ ಆಗಬೇಕು . ಈ ಪ್ರಾಕ್ಟಿಸ್ ಒಮ್ಮೆ ಚಾಲನೆಗೆ ಬಂದರೆ ಪ್ರತಿಯೊಬ್ಬನ ಕೈಯಲ್ಲೂ ದುಡ್ಡು ಪಡೆಯುವ ಸಾಧನೆ ಇರಬೇಕು . ಬಹುಷಃ ಎಲ್ಲರ ಬಳಿಯಲ್ಲಿರುವ ಮೊಬೈಲ್ ಇದಕ್ಕೆ ಸಾಧಕವಾದೀತು . ನಾನು ಒಂದು ರೂ ನ ಶೇಂಗಾ ತಿಂದರೂ ಕೂಡ ಅದು ಬಿಳಿ ಹಣದಿಂದ ಆಗಿರುತ್ತದೆ . ಇದರಿಂದ ಸುಮಾರು ತೊಂಬತ್ತು ಬಾಗ ಕಪ್ಪು ಹಣ ನಾಶವಾಗುತ್ತದೆ .

೩ ಸರಕಾರದ ಕಛೇರಿಗಳಲ್ಲಿ ದೌರ್ಜನ್ಯ : ಪ್ರತಿ ಅಧಿಕಾರಿಯೂ ಕೂಡ ಒಬ್ಬನ ಸೇವೆಯನ್ನು ಮಾಡಿದಾಗ , ಸೇವೆ ಪಡೆದ ವ್ಯಕ್ತಿಯಿಂದ ಸಹಿ ಪಡೆಯಬೇಕು . ವ್ಯಕ್ತಿ ಸಹಿ ಮಾಡದಿದ್ದರೆ ಅವನ ಸೇವೆ ವ್ಯರ್ಥ ವಾಗಬೇಕು . ಪ್ರತೀ ತಿಂಗಳಲ್ಲಿ ಮಿನಿಮುಂ ಸೇವೆಯನ್ನು ಮಾಡಬೇಕು. ಪ್ರತಿ ಸಹಿಗೂ ಒಂದು ಸೇವೆ ನಂಬರ್ ಇರಬೇಕು . ಇದರಿಂದ ಅಧಿಕಾರಿಗಳು ಸಹಿಯನ್ನು ಪೋರ್ಜರಿ ಮಾಡುವ ದುರಭ್ಯಾಸ ತಪ್ಪುತ್ತದೆ .ಅಧಿಕಾರಿಯ ಸೇವೆ ಮಿನಿಮುಂ ಗಿಂತ ಕಡಿಮೆ ಇದ್ದಾರೆ ಅವನ ಕೆಲಸ ಕಥಂ . ಪ್ರೊಮೋಷನ್ ಅವನ ಸಹಿ ಪಡೆದ ಸಂಖ್ಯೆಯಿಂದ ಅಧಾರವಾಗಿರಬೇಕು . ನೋಡಿ ಸಾರ್ ಹೀಗೆ ಮಾಡಿದರೆ ನೀವು ಅಲೆಯುವ ಅವಶ್ಯಕತೆ ಇಲ್ಲ . ಅಧಿಕಾರಿಗಳು ನಿಮ್ಮ ಹಿಂದೆ ಅಲೆಯಬೇಕಾದೀತು .

ಇನ್ನೂ ಕೆಲವು ಚುನಾವಣಾ ಬಗ್ಗೆ ಇವೆ . ಮುಂದುವರೆಸುತ್ತೇನೆ .