Thursday, September 6, 2012

ಮರೆಮಾಚು ...


ಅದವಳ ಶಾಲೆಯ ಮೊದಲನೇ ದಿನ ...
ಅಪ್ಪನೊಡೆ ಕೈಬೆರೆಳ ಹಿಡಿದು ಹೊರಟ ದಿನ
ಅವನಿಗೆ ಹೆಮ್ಮೆಯಾದರೂ ಇಬ್ಬರಲ್ಲೇನೋ ದುಗುಡ ದುಃಖ!!
ಪುಟ್ಟ ಮಗಳೋಡೆ ಪ್ರೀತಿಯ ಅಪ್ಪಾಜಿ ...
ಇನ್ನೇನು ಮಗಳ ಬಿಟ್ಟು ಬರುವ ಸಮಯ ..
ನನ್ನ ಬಿಟ್ಟು ಹೋಗದಿರು ಅಪ್ಪ!! ..
ಕಣ್ಣಿರಿನ ಹೊಳೆಹರಿಯೆ ನಾನೊಬ್ಬಳೆ ಹೇಗಿರುವದೆಂಬ ದುಗುಡ
ನಾನಿಲ್ಲಿರಲಾರೆ ಒಬ್ಬಳೇ ಬಿಡದಿರು ನನ್ನ ಇಲ್ಲಿ
ಕಣ್ಣೊರೆಸಿ ಸಮಾಧಾನಿಸಿದಾತ ಮರೆಮಾಚಿ ತನ್ನ ಕಣ್ಣೀರ ..
ನಾವಿಬ್ಬರೂ ದೂರವಿದ್ದರೂ ನಾ ನಿನ್ನೋಳಗಿರುವೆ
ನಾನಿಲ್ಲೇ ಇರಲು ಅಸಾದ್ಯವೇನೋ ..

ಅದವಳ ಮದುವೆಯ ದಿನ ..
ಮುದ್ದು ಮಗಳ ಹೊರಟ ಗಳಿಗೆ ಅದೆಸ್ಟು ಅಹಿತ ಅವಗೆ ..
ಆ ದಿನದ ಅವಳಲಂಕಾರ ಅವನೆಂದೂ ನೋಡಿಲ್ಲ ..
ಆದರೂ ಅವಳ ರೂಪವ ಬಲ್ಲವ ಅವನು ..
ಹೋಸಜೀವನದೊದೆ ಹೊರಟೊಡೆ ಮಮತೆಯ ಭಾಷ್ಪ ..
ಆನಂದ ಬಾಷ್ಪದಲ್ಲಿಯೂ ದೂರವಾಗುವಿಕೆಯ ಕಣ್ಣೀರ ಹನಿ ಅವನಲ್ಲಿ ..
ಅವಳು ದುಗುಡದ ಕಣ್ಣೀರನ್ನು ಗಮನಿಸುತ್ತಾಳಂದು..
ಕಣ್ಣೊರೆಸಿ ಸಮಾಧಾನಿಸಿದಾಕೆ ಮರೆಮಾಚಿ ತನ್ನ ಕಣ್ಣೀರ ..
ನಾವಿಬ್ಬರೂ ದೂರವಿದ್ದರೂ ನಾ ನಿನ್ನೋಳಗಿರುವೆ ..
ನಾನಿಲ್ಲೇ ಇರಲು ಅಸಾದ್ಯವೇನೋ ..

ಅವನ ಕೊಟಡಿಗೆ ಬಂದವಳು ಅವನ ಹಣೆಗೊಂದು ಮುತ್ತಿಟ್ಟು ..
ಅವನ ಹಾಸಿಗೆಯ ಬಲಕ್ಕೆ ಕೂರುತ್ತಾಳಂದು..
ಅವನ ಕೊನೆ ಗಳಿಗೆಯ ಆಸ್ಪತ್ರೆಯ ಹಾಸಿಗೆ ಅದು ...
ಅವಳ ಕೈ ಹಿಡಿದು ಬಿಗಿಯಾಗಿ ಅಪ್ಪಿತ್ತು..
ಅವನಿಗೆ ಶಕ್ತಿಬರಲೆಂಬ ಮಹದಾಸೆ ಅವಳದ್ದು ..
ಬೆಳೆದಾ ಮಗಳೋದೆ ಮರಣದ ಹಾಸಿಗೆಯಲ್ಲಿ ಹೆಮ್ಮೆಯ ಅಪ್ಪಾಜಿ ...
ಚಿಮ್ಮಿದ ಕಣ್ಣೀರಿನ ಜೊತೆ ಅಪ್ಪ ನನ್ನ ಬಿಟ್ಟು ಹೋಗದಿರೆಂಬ ಬಯಕೆ ..
ನಾನಿನ್ನ ಕಳೆದುಕೊಳ್ಳುವನೆಂಬ ದುಗುಡ ...
ಕಣ್ಣೊರೆಸಿ ಸಮಾಧಾನಿಸಿದಾತ ಮರೆಮಾಚಿ ತನ್ನ ಕಣ್ಣೀರ ..
ನಾವಿಬ್ಬರೂ ದೂರವಿದ್ದರೂ ನಾ ನಿನ್ನೋಳಗಿರುವೆ
ನಾನಿಲ್ಲೇ ಇರಲು ಅಸಾದ್ಯವೇನೋ ..

-- ಅಮರ ಕೆ ಜಿ , ಕಾನುಗೋಡು


ಉಸಿರಾಟದ ಒಲುಮೆಯ ಚಿಲುಮೆ ..

ನಾನಸ್ಟೆ ಅವೆರಡು ಸಂವತ್ಸರವ ಕಳೆದಿದ್ದೆ ..
ನನ್ನ ಹೆತ್ತಾತ ದೂರಾಗಿದ್ದ ..
ನನ್ನನ್ನೆಂದಿಗೂ ಪ್ರೀತಿಸುವ ಪ್ರಮಾಣಿಸಿದ್ದ ..
ಅದರೇನು.. ತಾನಿರಲು ಸಾದ್ಯವಿಲ್ಲೆಂದ ...
ದಿನಗಳು ವಾರಗಳಾದವು
ವಾರ ಮಣಿಗಳ ಮಾಲೆ ಮಾಸಗಳಾದವು ..
ಮಾಸಗಳ ತುದಿ ಮೊದಲು ವರುಷಗಳ ಕಳೆದಿತ್ತು ...
ನನ್ನ ಕನಸ ಆ ಅಪ್ಪನ ಕಾಣಲೇ ಇಲ್ಲ !! ..
ನನ್ನಾ ಕಣ್ಣೀರನ್ನ ವರೆಸಲು ಆತನಿರಲಿಲ್ಲ .. ..
ನನ್ನ ಮಲಗುವ ನಿದ್ದೆಗೆಂದೂ ಆತನ ಕಟ್ಟುಕತೆ ಮುದ್ದಿಸಲಿಲ್ಲ !!
ನನ್ನಾ ಹುಟ್ಟುಹಬ್ಬಕೆ ಆತನ ಕಾಣಿಕೆಗಳೆಲ್ಲಿ?
ಅದರೇನು ಪ್ರತಿ ಹಬ್ಬಕೂ ನನ್ನಲ್ಲಿ ಆತನ ನಿರೀಕ್ಷೆ ...
ನನ್ನ ಶಾಲೆಯ ಮೊದಲದಿನವ ನೋಡಲಿಲ್ಲ ಅವನು ..
ನನ್ನ ಶಾಲಾ ಜೀವನವ ಕೆದಕಲ್ಲಿಲ್ಲ ಕೊನೆಗೂ ...
ನಾನೆಸ್ಟು ಚತುರ ತಿಳಿಯದಾತ!! ...
ನನ್ನ ಅಂಕಪಟ್ಟಿಯಲ್ಲಿ ಎಲ್ಲದರಲ್ಲೂ ನಾಪಡೆದ 'A'
ಕೆಲವೊಮ್ಮೆ ನಾನವಗೆ ಕರೆಮಾಡುವಾಸೆ ..
ನಾನಿನ್ನೂ ಬದುಕಿರುವೆಂಬುದ ತಿಳಿಸುವ ತವಕ ..
ನಾನಿನ್ನೇನು ಹದಿನೆಂಟು ದಾಟುವೆ ...
ನಾ ಕಲಿಯಬೇಕೆಂಬ ಕಾರನ್ನು ಕಲಿಸುವ ಅವನೆಲ್ಲಿ?
ನಾ ಹೋಗುವ ಉನ್ನತ ಶಿಕ್ಷಣಕೆ ಆತನ  ಉಸಿರ ಬಯಕೆ ...
ನಾ ನನ್ನಾ ಬವಿಷ್ಯದೆಡೆ ತವಕಿಸುತ್ತಿರುವೆ... 
ಅದರೂ ಕಳೆದ ದಿನಗಳ  ಮಿಸುಕಾಡುತಿರುವೆ ...
ಊಹೆಗೂ ಮೀರಿ ನಾನೇನು ತಪ್ಪೆಸಗಿರುವೆ ?
  ಊಹೆಗೂ ಮೀರಿ ನಾನೇನು ತಪ್ಪೆಸಗಿರುವೆ !!?
ನನ್ನಾ ಪೋಷಕರು ವಿಚ್ಛೇದನ ಗೊಂಡಿದ್ದಾರಷ್ಟೇ ...
ಆದರೆ ಆದರೆ ...
  ನಾನು ಆತನ ಕಳೆದುಕೊಂಡೆ !!  
ಉಸಿರಾಟದ ಒಲುಮೆಯ ಚಿಲುಮೆಯ ನಾ ಪದೆಯದಾದೆ ...
ಅವರಿರ್ವರ ಜಗಳಕೆ ಕೂಸು ಬಡವಾಯಿತೇನೋ!!


Thursday, June 9, 2011

ಬ್ರಷ್ಟಾಚಾರ ನಿರ್ಮೂಲನೆಗೆ ನನ್ನದೊಂದು ಕನಸ ಕೂಸು . . . .

ಬಹುಷಃ ಈ ಬ್ರಷ್ಟಾಚಾರ ಎನ್ನುವ ಪಿಡುಗು ಹುಟ್ಟುವದು ಮತದಾರರಿಂದ. ಮತದಾರ ಮನೆ ಬಾಗಿಲಿಗೆ ಬಂದ ಚುನಾವಣಾ ಅಭ್ಯರ್ಥಿಯಿಂದ ಕ್ಷುಲ್ಲುಕ ಹಣ ಹೆಂಡಕ್ಕಾಗಿ ಬಾಯ್ಬಿಟ್ಟು ತನ್ನ ಅತೀಅಮೂಲ್ಯವಾದ ಮತವನ್ನ ಮಾರಾಟ ಮಾಡಿಬಿಡುತ್ತಾನೆ ಅಂದು ೧೦೦ ರೂಗೆ ಬಾಯ್ಬಿಟ್ಟ ಈತ ಮುಂದೆಂದೂ ಸರಿಮಾಡಲಾಗದಂತ ಬ್ರಷ್ಟಾಚಾರದ ರೋಗವನ್ನು ಪಸರಿಸುತ್ತಾನೆ. ಹಣ ಸುರಿದು ಗೆದ್ದ ಅಬ್ಯಾರ್ಥಿಯಾದರೂ ಮನುಷ್ಯನೇ .. ಸಾಲ ಮಾಡಿ ಗೆದ್ದ ಈತನಿಗೆ ಮತದಾರರಿಂದ ದುಡ್ಡು ಪಡೆಯುವ ರೋಗ ಹರಡಿರುತ್ತದೆ .. ಈತ ಈ ರೋಗವನ್ನು ಅಧಿಕಾರಿಗಳಿಂದ ದುಡ್ಡು ಪಡೆಯುವ ಮುಖಾಂತರ ಅವರಿಗೂ ಹರಡಿಸಿಬಿಡುತ್ತಾನೆ. ಅಧಿಕಾರಿಗಳೂ ಅದನ್ನ ತನ್ನ ಕೆಳಗಿನ ಅಧಿಕಾರಿಗಳಿಗೆ ಹರಡಿಸಿ .. ಒಟ್ಟಾರೆ ಉಸಿರಾಡುವ ಎಲ್ಲ ಮನುಷ್ಯರೂ ಈ ಭಯಾನಕ ರೋಗಕ್ಕೆ ಬಲಿಯಾಗುತ್ತಾರೆ .. ಮತದಾನ ಮಾಡುವಾಗ ನಿಯತ್ತಿದ್ದರೆ ದುಡ್ಡು ಪಡೆಯುವ ಅಧಿಕಾರಿಯಿಂದ ನಿಯತ್ತನ್ನು ಬಯಸಬಹುದು ... ನಾವು ನೆಡುವ ಗಿಡ ಮಾವು ಆಗಿದ್ದರೆ ನಮಗೆ ಅದು ಮಾವಿನ ಹಣ್ಣನ್ನು ಪಡೆಯಬಹುದು ಅಲ್ಲವೇ? .
ಈ ರೋಗ ಎಷ್ಟು ಬಲಿಷ್ಟವಾಗಿ ಹರಡಿದೆಯೆಂದರೆ ಈಗ ಎಲ್ಲರ ಕೈ ಮೀರಿ ಬ್ರಷ್ಟಾಚಾರ ನರ್ತಿಸುತ್ತಿದೆ.. ಬ್ರಷ್ಟಾಚಾರದ ಶಿಶು ರೌಡಿಸಂ .. ದೌರ್ಜನ್ಯ .. ಅನೈತಿಕತೆ .. ಆತಂಕ ಇದನ್ನು ಸಹಿಸರಾರದಷ್ಟಾಗಿದೆ ...
ಬಹುಷಃ ಈ ರೋಗವನ್ನು ನಿವಾರಿಸಲು ಒಂದು ಜೆನರೇಶನ್ ಸಂಪೂರ್ಣ ನಿರ್ನಾಮವಾಗಬೇಕಿದೆ ...
ನನಗೆ ಈ ರೋಗದ ನಿವಾರಣೆಗೆ ಕೆಲವು ಯೋಚನೆಗಳು ಕೆಲವೊಮ್ಮೆ ಬರುತ್ತಿರುತ್ತದೆ .. ಈ ಬ್ಲಾಗ್ ಓದುಗರೊಂದಿಗೆ ಇದನ್ನ ಹಂಚಿಕೊಳ್ಳುವಾಸೆ
೧. ಪ್ರತಿಯೊಬ್ಬ ಪ್ರಜೆಗೂ ಫುಲ್ಲಿ ಲೋಡೆಡ್ ಗನ್ನನ್ನು ಅತೀ ಉತ್ತಮ ಡಿಸ್ಕೌಂಟ್ ನಲ್ಲಿ ಕೊಡಬೇಕು . ಆತನಿಗೆ ಯಾವಾಗಲು ಇದನ್ನು ತನ್ನೊಡನೆ ಇಟ್ಟುಕೊಳ್ಳಲು ಅವಕಾಶ ಕೊಡಬೇಕು . ಇದರಿಂದ ಪ್ರತಿಯೊಬ್ಬನಿಗೂ ಬ್ರಷ್ಟಾಚಾರದ ವಿರುದ್ದ ಮಾತಾಡಲು ಸ್ವಲ್ಪ ಧೈರ್ಯ ಬರಬಹುದು. ಚುನಾವಣ ಭಾಷಣಗಳಲ್ಲಿ ಬೊಗಳೆ ಬಿಟ್ಟರೆ ಮುಂದಿರುವ mudi ಮನುಷ್ಯ ಅವನನ್ನು ಧಂ ಅನ್ನಿಸಬಹುದು .. ತಹಶೀಲ್ದಾರ್ ಆಫೀಸ್ ನಲ್ಲಿ ಅದಿಕಾರಿ ದುಡ್ಡು ಕೇಳಿದ ನಂತರದ ಕ್ಷಣದಲ್ಲಿ ಆತ ಇಲ್ಲದಿರಬಹುದು .. ನಾವು ಮಾಡುವುದಿಲ್ಲ ಎಂದಾದರೆ ನಮ್ಮೆದುರು ರೌಡಿಸಂ. ಅದೇ ನನ್ನ ಮತ್ತು ನನ್ನ ಸುತ್ತಮುತ್ತಲೂ ಇದ್ದವರ ಬಳಿ ಲೋಡೆಡ್ ಗಂನಿದೆ ಅಂದ್ರೆ ಅದು ಸುಲಭ ಅಲ್ಲ . ಇದರಿಂದ ಅನೇಕ ಅಮಾಯಕರೂ ಕೂಡ ಸಾವನ್ನಪ್ಪಬಹುದು. ಆದರೂ ಕೂಡ ಒಂದು ಸಮಾಜವನ್ನ ಸರಿದಾರಿಗೆ ತರಲು ಕೆಲವೊಮ್ಮೆ ನಾವು ಒಳ್ಳೆಯದನ್ನು ಕಳೆದುಕೊಳ್ಳಬೇಕು . .
2 ಎರಡನೆಯದಾಗಿ ಹಣ . ಹಣ ಹರಿಯುವ ಎಲ್ಲಾ ದಾರಿಗಳು ಗೊತ್ತಾಗುತ್ತಿರಬೇಕು . ಚುನಾವಣ ಅಭ್ಯರ್ಥಿ ಮತದಾರನಿಗೆ ೧೦೦ ರೂ ಕೊಟ್ಟರೆ ಕೂಡಲೇ ಅದು ತಿಳಿಯಬೇಕು . ಅಧಿಕಾರಿ ಲಂಚ ಪಡೆದರೆ ಅದೂ ಕೂಡ ನೋಟ್ ಆಗುವಂತಿರಬೇಕು .ಇದು ಅಸಾಧ್ಯ ಎಂಬುದು ನಮ್ಮೆಲ್ಲರ ಕಲ್ಪನೆ . ಆದರೆ ಇದು ಸಾಧ್ಯ . ಈ ಪೇಪರ್ ಹಣವನ್ನ ನಿರ್ಮೂಲನೆ ಮಾಡಬೇಕು . ಎಲ್ಲ ಪೇಪರ್ ಹಣವನ್ನ ಸುಡಬೇಕು . ಈ ಎಲ್ಲ ಹಣವನ್ನ ಎಲೆಕ್ಟ್ರೋನಿಕ್ ದುದ್ದನ್ನಗಿ ಪರಿವರ್ತಿಸಬೇಕು . ಓಕೆ ಇಂದಿನಿಂದ ನಮ್ಮ ಎಲ್ಲ ಹಣದ ವ್ಯವಹಾರಗಳು ನಮ್ಮ ಕಾರ್ಡ್ ನ ಮುಖಾಂತರ ಅಥವಾ ಮೊಬೈಲ್ ಮುಖಾಂತರ ಆಗಬೇಕು . ಈ ಪ್ರಾಕ್ಟಿಸ್ ಒಮ್ಮೆ ಚಾಲನೆಗೆ ಬಂದರೆ ಪ್ರತಿಯೊಬ್ಬನ ಕೈಯಲ್ಲೂ ದುಡ್ಡು ಪಡೆಯುವ ಸಾಧನೆ ಇರಬೇಕು . ಬಹುಷಃ ಎಲ್ಲರ ಬಳಿಯಲ್ಲಿರುವ ಮೊಬೈಲ್ ಇದಕ್ಕೆ ಸಾಧಕವಾದೀತು . ನಾನು ಒಂದು ರೂ ನ ಶೇಂಗಾ ತಿಂದರೂ ಕೂಡ ಅದು ಬಿಳಿ ಹಣದಿಂದ ಆಗಿರುತ್ತದೆ . ಇದರಿಂದ ಸುಮಾರು ತೊಂಬತ್ತು ಬಾಗ ಕಪ್ಪು ಹಣ ನಾಶವಾಗುತ್ತದೆ .

೩ ಸರಕಾರದ ಕಛೇರಿಗಳಲ್ಲಿ ದೌರ್ಜನ್ಯ : ಪ್ರತಿ ಅಧಿಕಾರಿಯೂ ಕೂಡ ಒಬ್ಬನ ಸೇವೆಯನ್ನು ಮಾಡಿದಾಗ , ಸೇವೆ ಪಡೆದ ವ್ಯಕ್ತಿಯಿಂದ ಸಹಿ ಪಡೆಯಬೇಕು . ವ್ಯಕ್ತಿ ಸಹಿ ಮಾಡದಿದ್ದರೆ ಅವನ ಸೇವೆ ವ್ಯರ್ಥ ವಾಗಬೇಕು . ಪ್ರತೀ ತಿಂಗಳಲ್ಲಿ ಮಿನಿಮುಂ ಸೇವೆಯನ್ನು ಮಾಡಬೇಕು. ಪ್ರತಿ ಸಹಿಗೂ ಒಂದು ಸೇವೆ ನಂಬರ್ ಇರಬೇಕು . ಇದರಿಂದ ಅಧಿಕಾರಿಗಳು ಸಹಿಯನ್ನು ಪೋರ್ಜರಿ ಮಾಡುವ ದುರಭ್ಯಾಸ ತಪ್ಪುತ್ತದೆ .ಅಧಿಕಾರಿಯ ಸೇವೆ ಮಿನಿಮುಂ ಗಿಂತ ಕಡಿಮೆ ಇದ್ದಾರೆ ಅವನ ಕೆಲಸ ಕಥಂ . ಪ್ರೊಮೋಷನ್ ಅವನ ಸಹಿ ಪಡೆದ ಸಂಖ್ಯೆಯಿಂದ ಅಧಾರವಾಗಿರಬೇಕು . ನೋಡಿ ಸಾರ್ ಹೀಗೆ ಮಾಡಿದರೆ ನೀವು ಅಲೆಯುವ ಅವಶ್ಯಕತೆ ಇಲ್ಲ . ಅಧಿಕಾರಿಗಳು ನಿಮ್ಮ ಹಿಂದೆ ಅಲೆಯಬೇಕಾದೀತು .

ಇನ್ನೂ ಕೆಲವು ಚುನಾವಣಾ ಬಗ್ಗೆ ಇವೆ . ಮುಂದುವರೆಸುತ್ತೇನೆ .

Monday, December 13, 2010

ಅಪ್ಪ ನಾನು ಬರುತ್ತೇನೆ .. ಹೋಗಿಬರುತ್ತೇನೆ ! ..




ಸೃಷ್ಟಿಯ ಆಸೆಯಲ್ಲಿ ಅಪ್ಪನಿಗೆ ತನ್ನ ಮಗಳನ್ನು ಕಂಡರೆ ಅದೇನೋ ವಿಶೇಷ ಮಮತೆ. ಯಾರ ಮಾತಿಗೂ ಬಗ್ಗದ ವ್ಯಕ್ತಿತ್ವ ಮಗಳ ಮಾತಿಗೆ ಮೌನ !! . ಸಿಟ್ಟು ಬಂದಾಗ ಮಗಳಿಗೆ ಸ್ವಲ್ಪ ಸಿಡುಮಿಡುಸಿದರೂ ಒಳಗೊಳಗೇ ಮಗಳಿಗೆ ಸಿಡುಕಿದೆನೆಂಬ ದೋಷಿತನ.

ಮಗಳು ಹುಟ್ಟಿ , ಪುಟ್ಟ ಪುಟ್ಟ ಹೆಜ್ಜೆಯ ಗೆಜ್ಜೆಯ ಝೇಂಕಾರಿಸಿ ಮೆದು ಮೃದುವಿನ ಆ ಗೊಜ್ಜ ನುಡಿಯ ಸರಿದೂಗಿಸಿ ಇಂಪಾಗಿ ' ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ ' ಎಂಬಷ್ಟರಲ್ಲಿ ಆ ಹದಿನಾರರ ದಿನಗಳ ದಾಟಿ ಆಗ ತಾನೇ ಅರಳುತ್ತಿರುವ ಕೆಂಪು ಕಮಲದ ಪ್ರತೀಕವಾಗಿರುತ್ತಾಳೆ. ಅಪ್ಪನಿಗೆ ನನ್ನ ಮುದ್ದು ಅದೆಷ್ಟು ಬೇಗ ನನಗೆ ತಿಳಿಯದೆ ಬೆಳೆದಳೆಂಬ ಆನಂದ ಭಾಷ್ಪ ಜೊತೆಗೆ ನಾನೆಷ್ಟು ದುಡಿದರೂ ನನ್ನ ಚಿನ್ನು ನನ್ನ ಮನೆಯಲ್ಲಿ ತನ್ನ ಅದೆಷ್ಟು ದಿನ ನಲಿದಿರಬಹುದೆಂದು ಆಲೋಚಿಸೆ , ಕಂಠ ಒತ್ತಿಬಂದಂತಾಗಿ ಹೃದಯದಾಳದಿಂದ ಉಕ್ಕಿ ಬರುವ ದುಖ್ಖ ಬಹಳ ದಿಗಂತದಷ್ಟು ವಿಚಾರವನ್ನು ಆವರಿಸಿರುತ್ತದೆ. ಮಗಳಿಗಾಗಿ ಅವಳನ್ನು ಸಂತೋಷಿಸಲು ಕೇವಲ ಎರಡೇ ಹಬ್ಬ , ಅವಳ ತವರು ಮನೆಯ ಜೀವನದಲ್ಲಿ. ಒಂದು ನಾನು ನಿಮ್ಮನೆಯಲ್ಲಿ ಜನಿಸುತ್ತಿದ್ದೀನೆಂಬ ಹುಟ್ಟು ತೊಟ್ಟಿಲ ಹಬ್ಬ ಆನಂತರ ಈ ಹುಟ್ಟಿ ನಲಿದು ಬೆಳೆದ ಅವಳು ಮನೆಯನ್ನ ಬಿಟ್ಟು ಹೊರಡುತ್ತಿದ್ದೀನೆಂಬ ಸೂಚಕದ ಆ ಹೊಸ ಜೀವನದ ಮದುವೆಯ ಹಬ್ಬ. ಮೊದಲ ಹಬ್ಬದಲ್ಲಿಯೂ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ದಾಟಿಸುವಾಗ ನೋವಿನ ಅಳು .. ಎರಡನೆಯ ಆ ಮದುವೆಯ ಹಬ್ಬದಲ್ಲಿಯೂ ಬೇರೊಬ್ಬರ ಕೈ ಸೇರುತ್ತೇನೆಂಬ ಅಂತರಾತಂಕದ ನೋವಿನ ಅಳು !! . ಇವೆರಡರ ನಡುವೆ ಮನೆಯಲ್ಲಿ ನಡೆಯುವ ತಮ್ಮನ ಚೌಲ ಉಪನಯನಾದಿ ಕಾರ್ಯಕ್ರಮಗಳಲ್ಲಿ , ಆ ಹೊಳೆಯುವ ಉದ್ದ ಲಂಗ ತೊಟ್ಟು , ಬಂದವರಿಗೆಲ್ಲ ಊಟದ ನಂತರ ಅಡಕೆ ಪುಡಿಯನ್ನ ಚಮಚದಲ್ಲಿ ನೀಡಿ , ಅದೆಲ್ಲೋ ಮೂಲೆಯಲ್ಲಿ ಕುಳಿತು ಸ್ವಲ್ಪ ಊಟ ಮಾಡಿ , ಬಂದ ಗೆಳತಿಯರೊಡೆ ಎಡಗೈಲಿ ಆ ಉದ್ದ ಲಂಗವ ಹಿಡಿದು ಬಲಗೈ ಮೇಲೆತ್ತಿ ಒಂಟಿಕಾಲಿನಲ್ಲಿ ಕುಂಟ್ಯಾಲಿಪ್ಪಿ ಅಡಿ ಮೈ ಮರೆತು ಸಂತೋಷ ಪಟ್ಟ ದಿನಗಳು ಈ ಮದುವೆಯ ದಿನ ಇಲ್ಲಿಯವರೆಗೂ ಕಾಣದ ಆ ಪತಿಯೊಡನೆ ಹೊರಟು ಒಮ್ಮೆ ತಿರುಗಿ ನಿಂತು ಮನೆಯನ್ನು ಕಣ್ಬಿಟ್ಟು ನೋಡಿದಾಗ ಆ ಅಂತರಾತ್ಮಕ್ಕೆ ಇಲ್ಲಿಯವರೆಗೆ ನಡೆದದ್ದೆಲ್ಲ ಕನಸೇನೋ ಎನ್ನುವ ಭಾಸದ ಕಣ್ಣೀರನ್ನು ನೋಡಿ ಆ ಕಂದನನ್ನ ದಾರೆಯೆರೆಯುವ ಅಪ್ಪ ಹೇಗೆ ತಾನೇ ಖುಷಿಯಿಂದಿರಲು ಸಾಧ್ಯ? ಅವನ ದುಖ್ಖವನ್ನ ಬಹುಶಯ ಯಾರೂ ಗಮನಿಸಲು ಸಾಧ್ಯವಿಲ್ಲ . ಅಪ್ಪನ ಸ್ಥಾನವೇ ಹಾಗೆ . ಸಂತೋಷವನ್ನ ಮಾತ್ರ ಹಂಚಿಕೊಂಡು ದುಖ್ಖಃವೇನಿದ್ರೂ ತಾನೊಬ್ಬನೇ ನುಂಗುವ ಆಕಸ್ಮಿಕ ಜೀವನದ ಒಂದು ಅಪರೂಪದ ಪಾತ್ರ . ಈ ಸಮಯದಲ್ಲಿ ಆ ಮುದ್ದು ಮಗಳು 'ಅಪ್ಪ ನಾನು ಬರುತ್ತೇನೆ .. ಹೋಗಿಬರುತ್ತೇನೆ ' ಎಂದಲ್ಲಿ ಅದೇ ಅಪ್ಪನಿಗೆ ತನ್ನ ಕೊನೆ ಕ್ಷಣದಲ್ಲಿ ಲೋಕವನ್ನು ಬಿಟ್ಟು ಹೊರಡುವ ದಿನದ ಅನುಭವ ಅಲ್ಲಿಯೇ ಆಗಬಹುದೇನೋ . ಹೃದಯದ ಸ್ವಲ್ಪ ಕೆಳಭಾಗ ಉದರದ ಸ್ವಲ್ಪ ಮೇಲ್ಭಾಗ ತಣ್ಣನೆಯ ಕೆಟ್ಟ ಅನುಭವ ಕಣ್ಣೀರನ್ನು ಚಿಮ್ಮಿಸುತ್ತದೆ.
ಅಪ್ಪನ ಸ್ಥಾನದಲ್ಲಿ ನಿಂತ ಅವನು ತನ್ನ ಮಗಳು ಹೊಸ ಮನೆಗೆ ಕಾಲಿಟ್ಟು , ಆ ಕುಟುಂಬದ ಮನ ಗೆದ್ದು ಆ ಮನೆಯ ರಥವನ್ನು ಯಾವುದೇ ತೊಡಕಿಲ್ಲದೆ ನಡೆಸಿದಾಗ , ಪತಿ ಮನೆಯ ಪ್ರತಿ ಶ್ಲಾಘನೆಗಳು ' ನನ್ನ ಹೆಮ್ಮೆಯ ಮಗಳು ' ಎಂದು ಹೇಳುವದರೊಂದಿಗೆ ತನ್ನ ಹೃದಯವಂತಿಕೆಯನ್ನು ಇಮ್ಮುಡಿಗೊಳ್ಳಿಸುತ್ತಾನೆ. ಮಗಳಿಗೂ ಕೂಡ ಅಪ್ಪ ಪ್ರಾತಃ ಸ್ಮರಣೀಯನೆ ...

ಅಬ್ಬ ಅದೆಂತ ಅದ್ಭುತ ಸಂಭಂದ . ತಂದೆಗೆ ಮಗಳಿಂದ ಅದೆಂತ ಅದ್ಭುತ ಅನುಭವ . ನಮಗನ್ನಿಸುತ್ತದೆ ಹೆಣ್ಣು ಎಂಬ ಸೃಷ್ಟಿ ಅಪ್ಪನ ಮಗಳ ಆ ಮಮತೆಯ ತಂಪಿನ ಇಬ್ಬನಿಯ ಸಂಬಂಧಕ್ಕಾಗಿಯೇ ಇರಬಹುದೇನೋ . . . .

- ' ಅಮರ ಕಾನುಗೋಡು ಗಣಪತಿ '

ಕಿಶೋರರು - ಈ ವಯಸ್ಸೇ ಹೀಗೆ . . . . .



ಕ್ಷಣ ಕ್ಷಣವೂ ಸಡಗರ . .
ಮುಂದೇನೆಂಬುದರ ಹಂಬಲ . . .
ಕಿಲ ಕಿಲನೆ ಹೊರಡುವ ಆ ನಗೆಗೆ ...
ಕೊನೆಬಿಂದು ಎಲ್ಲೆಂಬುದರ ಕಳವಳ ...
ಈ ವಯಸ್ಸೇ ಹೀಗೆ -- - -
ಮೊಂಡತನ ಭಂಡತನದ ನಡುವೆ ,
ಆಲಿಂಗತನದ ಆಸೆ ... ದುರಾಸೆ !. .
ಕಾಮದ ಕಿಲಾಡಿತನಕ್ಕೆ ಜೀವತುಂಬುವಾಸೆ . .
ಕಾಮಿನಿಯರ ಕಣ್ಣಿಗೆ ಕಣ್ಣಿಟ್ಟು ನೋಡುವಾಸೆ . .
ಕುಡಿಮೀಸೆಯ ಆಸೆಗೆ ತಾಳ ಹಾಕುವಾಸೆ .!.
ಈ ಎಲ್ಲ ಹುಡುಗಾಟದಂಚಿಗೆ . . . . .
ಸಮಾಜದಲ್ಲಿ ಬೆಳೆಯುವಾಸೆ ... ಬೆಳಗುವಾಸೆ ...
ಮುಂದೇನೆಂಬುದರ ಪ್ರಶ್ನೆಗೆ
ಉತ್ತರ ಹುಡುಕುವ ಜಿಜ್ಞಾಸೆ .. ... ....
ಈ ವಯಸ್ಸೇ ಹೀಗೆ .. .. ..
ಆಸೆಗಳ ನಡುವೆಯೂ ಪ್ರಶ್ನೆಗಳ ಉತ್ಪ್ರೇಕ್ಷೆ . . .
ಜಗತ್ತಿನೆಲ್ಲವನ್ನೂ ಕನಸು ಕಾಣುವ ಶಕ್ತಿ !
ಕನಸನ್ನೆಲ್ಲವ ನನಸಾಗಿಸುವ ಪ್ರಚಂಡ ಯುಕ್ತಿ !! .
ಸ್ವಂತ ಶಕ್ತಿಯಲ್ಲಿ ಈ ವಯಸ್ಸಿಗೆ
ಹೃದಯ ಪೂರ್ವಕ ಭಕ್ತಿ !.
ಈ ವಯಸ್ಸೇ ಹೀಗೆ ... ಈ ವಯಸ್ಸು ಹೀಗೆಯೇ .. .
----' ಅಮರ ಕಾನುಗೋಡು ಗಣಪತಿ '

Friday, December 10, 2010

ಭವತಿ ಬಿಕ್ಷಾಂ ದೇಹಿ . . .

ವಟು ಹಳದಿ ಬಟ್ಟೆಯ ಸುತ್ತಿ ಒಂದು ಎಲೆ ಇರುವ ಆ ಮುತ್ತುಕದ ಕೋಲನ್ನು ಹಿಡಿದು ಬುಜಕ್ಕೆ ಒರಗಿಸಿ . ಗೋಪಿ ಚಂದನವ ಲೇಪಿಸಿ . ಚಿಕ್ಕದಾದ ಜುಟ್ಟವನ್ನ ಬಿಟ್ಟು .. ಹಳದಿ ಶಲ್ಯವ ಚೀಲವ ಮಾಡಿ ಭವತಿ ಬಿಕ್ಷಾಂ ದೇಹಿ ಎಂದಾಗ ನಿಜಕ್ಕೂ ' ಭಿಕ್ಷೆ ' ಎಂಬ ಪದ ಧಾರ್ಮಿಕ ವಾಗಿ ಅತೀ ಶ್ರೇಷ್ಠ ಅರ್ಥವುಳ್ಳದ್ದು ಎಂದು ಯಾರಿಗಾದರೂ ತಿಳಿಯುವಂತದ್ದೆ . ನಾನು ಇಲ್ಲಿಯವರೆಗೆ ಅಷ್ಟೇನೂ ಧಾರ್ಮಿಕ ಜವಾಬ್ದಾರಿ ಹೊತ್ತಿರಲಿಲ್ಲ .. ಇವತ್ತಿನ ದಿನದಿಂದ ನನ್ನ ನಾಲಿಗೆಯಲ್ಲಿ ಸುಸಂಸ್ಕೃತ ನುಡಿಗಳನ್ನು ಚೆಲ್ಲುತ್ತೇನೆ .. ಮನುಷ್ಯನಾಗಿ ಹುಟ್ಟಿದ ಈ ಜನ್ಮ ಬಹಳ ಶ್ರೆಷ್ಟದ್ದು .. ಅನೇಕ ಪ್ರಾಣಿಗಳಿಗಿಂತ ಮಿಗಿಲಾದ ನಾನು ಶಬ್ಧವನ್ನ ನುಡಿಗಳಾಗಿ ಪ್ರಸವಿಸಬಹುದು. ಇಲ್ಲಿಯವರೆಗೆ ಅನೇಕ ಪದಗಳನ್ನು ಕಲಿತಿದ್ದೇನೆ .. ಇನ್ನು ಮುಂದೆ ಸುಸಂಸ್ಕೃತ ಪದಗಳನ್ನು ಕಲಿಯುತ್ತೇನೆ .. ನನಗೆ ಅವುಗಳನ್ನು ಕಲಿಯಲು ಇರುವ ದಿನದ ಒಂದು ಹಗಲು ಒಂದು ರಾತ್ರೆ ಸಾಲದು ... ನೀವು ಬಿಕ್ಷೆ ನೀಡಿ . ನನ್ನ ಉಳಿದ ಕ್ಷಣಗಳನ್ನು ಧಾರ್ಮಿಕ ಪದಗಳನ್ನು ಉಚ್ಚರಿಸಲು ಮೀಸಲಿಡುತ್ತೇನೆ . ಈ ಬೂಮಂಡ್ಲಕ್ಕೆ ಒಳ್ಳೆಯದನ್ನು ಸದಾ ಪಸರಿಸುತ್ತೇನೆ . ಹೀಗೆಲ್ಲಾ ಒಳ್ಳೆಯ ಅರ್ಥಗಳಿರಬಹುದು. ಗುರು ಶಿಷ್ಯರ ಸಂಬಂದದಲ್ಲಿ ಅನೇಕ ಶಿಷ್ಯರು ತಮ್ಮ ಗುರುವಿಗಾಗಿ ಬಿಕ್ಷೆ ತರುವ ಅನೇಕ ಧಾರ್ಮಿಕ ವ್ಯವಸ್ಥೆಯನ್ನು ಕೇಳಿದ್ದೇವೆ . ಇದರರ್ಥದಲ್ಲಿ ಗುರುಗಳಿಗೆ ಬಿಕ್ಷೆ ಕೇಳುವ ಸಮಯವೂ ಅತೀ ಮುಖ್ಯ ಎನ್ನುವ ಸಾದಾರಣ ಅರ್ಥವನ್ನು ಊಹಿಸಬಹುದು . ಇದನ್ನೆಲ್ಲಾ ಗಮನಿಸಿದರೆ ಸಾಧು ಸಂತರು ಗುರುಗಳು ಇವರೆಲ್ಲರಿಗೂ ಅನ್ವಯವಾಗುವ ಭಿಕ್ಷೆ ಅನ್ನುವ ಪದ ಅದೆಷ್ಟು ಶ್ರೇಷ್ಟಎಂಬುದು ನಮೆಗೆಲ್ಲ ಅರಿವಾಗುತ್ತದೆ . ಇವರೆಲ್ಲರಿಗೂ ಭಿಕ್ಷೆ ಒಂದು ದಂದೆಯಲ್ಲ. ತಮ್ಮ ಸುಸಂಸ್ಕೃತ ಹಾದಿ ಸುಗಮವಾಗಲೆಂದು ಎಲ್ಲರ ಮನುಕುಲದ ಒಳಿತಿಗಾಗಿ ಸ್ವೀಕರಿಸಿದ ಒಂದು ಮಾರ್ಗ ಅಷ್ಟೇ . ಭಿಕ್ಷೆ ಎನ್ನುವ ಪದಕ್ಕೆ ಒಂದು ತುದಿ ಇದೆ. ಹಿನ್ನೆಲೆ ಇದೆ . ಹೀಗಾಗಿ ಒಬ್ಬ ಭಿಕ್ಷೆ ಕೇಳುತ್ತಿದ್ದಾರೆ ಅಂದರೆ ಅವರು ಜಗತ್ತಿನ ಅತೀ ಶ್ರೇಷ್ಟ ಮಾನವ , ದೇವರಿಗೆ ಸಮಾನವದವರು ಎಂದರ್ಥ . ಮನುಷ್ಯನಿಗೂ ಕೂಡ ಒಂದು ಸಮಯದಲ್ಲಿ ನಾನು ಇವತ್ತು ಈ ಲೋಕವನ್ನು ತ್ಯಜಿಸಿದರೆ ಮತ್ತೆ ಹುಟ್ಟಿ ಬರುತ್ತೇನೆಂಬ ನಂಬಿಕೆ ಇತ್ತು. ರಕ್ತದ ಯಾವದೋ ಮೂಲೆಯ ಕಣದಲ್ಲಿ ಮತ್ತೆ ಮಾನವನಾಗಿ ಹುಟ್ಟಿಬರಲೆಂಬ ಸ್ವಾರ್ಥ ಅಡಗಿದ್ದರೂ , ಇಹ ಲೋಕ ಸಾದು ಸಂತರಿಂದ ಉಳಿಯುವದೆಂಬ ಭಾವನೆ ಆತನ ಧಾನ ಧರ್ಮಕ್ಕೆ ಪೂರಕವಾಗಿತ್ತು.
ಈಗ ಕಾಲ ಸ್ವಲ್ಪ ಬದಲಾಗಿದೆ . ಭಿಕ್ಷೆ ಬೇಡುವದು ಒಂದು ದಂದೆಯಾಗಿ ಮಾರ್ಪಟ್ಟಿದೆ . ಮನುಷ್ಯ ಬುದ್ದಿವಂತನಾದೊದಗಿಂದ ಸಂಸ್ಕಾರದ ಬೆಲೆ ಕುಸಿಯುತ್ತಿದೆ . ಭಿಕ್ಷೆ ಎಂಬ ಪದ ಎಲ್ಲರಿಗೂ ಹೆಸುಗೆ ಅನ್ನುವಷ್ಟು ಮಾರ್ಪಟ್ಟಿದೆ . ಭಿಕ್ಷೆ ಅಂದರೆ ಭಿಕಾರಿ ಅನ್ನುವ ಮನೋಭಾವ ಮೂಡುವಂತಾಗಿದೆ. ನಿಜವಾದ ಸಾಧು ಸಂತರಿಗೆ ಹಿಂಸೆಯಾಗುವಂತೆ ಭಾಸವಾಗುತ್ತಿದೆ .
ಈಗಿರುವ ಅನೇಕ ಭಿಕ್ಷುಕರು ನಿಜವಾಗಿಯೂ ಭಿಕ್ಷುಕರಲ್ಲ . ಬುದ್ದಿವಂತರು ಅತೀ ಬುದ್ದಿವಂತರು . ಇನ್ನೊಬ್ಬರ ಮನೋಭಾವವನ್ನು ಕಣ್ಣಳತೆಯಲ್ಲಿ ಅರಿಯುವ ಅಸಾಸುರರು . ಮನೋವಿಜ್ಞಾನಿಗಳು . ಹೃದಯದಲ್ಲಿ ಕ್ರೂರಿಗಳು . ಭಿಕ್ಷೆಯನ್ನೇ ಮೂಲ ದಂದೆಯಾಗಿ ಜನರನ್ನು ಮೋಸಗೊಳಿಸುತ್ತಿರುವ ಸಂಹಾರಕಾರರು . ಅವರದ್ದೇ ಒಂದು ದೊಡ್ಡ ಸಾಮ್ರಾಜ್ಯ . ಸಾಧುಗಳಂತೆ ವೇಷ ಧರಿಸಿ ದುಡ್ಡನ್ನು ಹಗಲ್ಲಲ್ಲಿ ಕ್ರೌಡಿಕರಿಸಿ ಸಂಜೆಯಾಗುತ್ತಿದ್ದಂತೆ ಇಲ್ಲ ಸಲ್ಲದ ದಂದೆಗೆ ಅಮಾಯಕರ ದುಡ್ಡನ್ನು ಚೆಲ್ಲುವವರು . ಭಿಕ್ಷಾಟನೆಯೇ ತಮ್ಮ ಸಂಸಾರದ ಮೂಲ ದಂದೆಯನ್ನಾಗಿಸಿ ತಮ್ಮ ಮುಂದಿನ ಪೀಳಿಗೆಗೂ ಅದರ ಲಾಭವನ್ನು ತೋರಿಸಿ ಅವರನ್ನೂ ಭಿಕ್ಷೆಗೆ ತಳ್ಳುವದು. ಬೆಂಗಳೂರಿನಂತಹ ನಗರಕ್ಕೆ ಹೋದರಂತೂ ಅಭ್ಭ ಎನ್ನುವತಹ ಬಣ್ಣ ಬಣ್ಣ ದ ಭಿಕ್ಷುಕರು . ಕೃಷಿಕನ ಸ್ವಂತ ಭೂಮಿಯಲ್ಲಿ ಅವನದೇ ಆದ ಗಡಿಗಳಿದ್ದಂತೆ ಭಿಕ್ಷುಕರೂ ತಮ್ಮ ತಮ್ಮ ಭಿಕ್ಷೆ ಬೇಡುವ ಗಡಿಗಳನ್ನು ಹಾಕಿಕೊಂಡಿರುತ್ತಾರೆ . ಅವರದ್ದೂ ದೊಡ್ಡ ದೊಡ್ಡ ಸಂಘಗಳಿರುತ್ತವೆ . ಅವರಲ್ಲೇ ಗುಂಪು ಘರ್ಶನೆಯಿರುತ್ತದೆ . ಅವರಲ್ಲೂ ಶ್ರೀಮಂತ ಭಿಕ್ಷುಕ ಬಡ ಭಿಕ್ಷುಕ ಎನ್ನುವ ಅಳತೆಗಲಿರುತ್ತದೆ . ದಾರಿಯಲ್ಲಿ ಹೋಗುವವರಿಗೆ ಹಿಂಸೆ ಆರಂಭವಾಗಿದೆ . ಅದರಲ್ಲೂ ಹೊರದೆಶದವರೆನಾದರೂ ಅವರ ಕೈಗೆ ಸಿಕ್ಕರೆ ಮುಗಿದೇ ಹೋಯ್ತು . ಅವರು ತಮ್ಮ ದೇಶಗಳಿಗೆ ಹೋಗಿ ಆಲ್ ಇಂಡಿಯನ್ಸ್ ಆರ್ ಬೆಗ್ಗರ್ಸ್ ಎಂದು ಹೇಳಿಬಿಡುತ್ತಾರಷ್ಟೇ .
ಸಮಾಜದಲ್ಲಿ ಭಿಕ್ಷುಕ ಎನ್ನುವ ಪದಕ್ಕೆ ಕ್ಷುಲ್ಲುಕ ಅರ್ಥ ಬಂದುಬಿಟ್ಟಿದೆ .
ಇಲ್ಲಿಯವರೆಗೆ ಹೇಳಿದ್ದು ದಾರಿಯಲ್ಲಿ ನಾವು ಕಾಣುವ ಭಿಕ್ಷುಕರು . ಆದರೆ ಇದಕ್ಕೂ ಭೀಕರ ಭಿಕ್ಷುಕರು ನಮ್ಮ ಸರಕಾರದಲ್ಲಿದ್ದಾರೆ , ಕಛೇರಿಗಳಲ್ಲಿರುತ್ತಾರೆ . . . . . !!! ..
ಒಟ್ಟಾರೆ ಹೇಳುವದಾದರೆ " ಭಿಕ್ಷೆ " ಅನ್ನುವ ಒಂದು ಶ್ರೇಷ್ಟ ಪದ ಇಷ್ಟು ಕೀಳುಮಟ್ಟಕ್ಕೆ ಮಾರ್ಪಾಡಾಗುತ್ತಿದೆಯೆಂದರೆ ಇದೊಂದು ದೊಡ್ಡ ಅನಾಹುತವೇ ಸರಿ!! .
- ಅಮರ ಕಾನುಗೋಡು ಗಣಪತಿ

Thursday, December 9, 2010

ನಿಜ ಜೀವನ ತುದಿಗೇರಿ ಬಂದು . .



ಹಸ್ತಾವಲಾಘನ ಆತ್ಮಾವಲಾಘನ ಎರಡರ ವ್ಯತ್ಯಾಸ ತಿಳಿದೊಡೆ
ನೀನಿರುವೆ ಮಾರ್ಮಿಕಥೆಯ ಹಾದಿಯಲಿ ...
ನೀ ತಿಳಿಯುವೆ ,
ಪ್ರೀತಿ ಕೇವಲ ಲೀನವಾಗುವಿಕೆಯಲ್ಲ ..
ಒಂದೆಡೆ ಸೇರುವಿಕೆ ಕೇವಲ ರಕ್ಷಣೆಗಾಗಲ್ಲ . . .
ನೀನಿಡುವ ಮಧುರ ಚುಂಬನ ಕೇವಲ ಗುರುತಿಗಲ್ಲ ..
ನೀಕೊಡುವ ಆ ಅಂಗಚಿತ್ತ ಕೇವಲ ಒಡಂಬಡಿಕೆಯಲ್ಲ ..
ನೀ ತಲೆ ಎತ್ತಿ ಕಣ್ಬಿಟ್ಟು ಒಪ್ಪಿದ ನಿನ್ನ ತಪ್ಪುಗಳು ಕೇವಲ ಉದ್ವಿಘ್ನತೆಯ ಮಗುವಿನ ತಾರಕವಲ್ಲ...
ಅನಿಶ್ಚಿತತೆಯ ನಾಳೆಯ ಹಸಿರಂಗಳಕ್ಕೆ ನೀ ನಿಂದು ಹುಡುಕಿದ ಹಾದಿಯಲ್ಲಿ
ಸೂರ್ಯೋದಯದ ಬೆಳಗೂ ಕೆಲವೊಮ್ಮೆ ಸುಡುವಂತೆ ಭಾಸವೋ .. ..
ನಿನ್ನಾತ್ಮವ ಶೃಂಗರಿಸಿ , ಬೇರೊಬ್ಬರು ಹೂವು ಕೊಡುವ ಮುನ್ನ , ಉದ್ಯಾನ್ನವ ಚಿಗುರೊಡೆಸು ..
ನೀ ನಿನ್ನ ನಂಬು .. ನಿನ್ನ ಒಳ್ಳೆಯತನವ ಚಿಮ್ಮು ...
ಕಾರಣ ನೀನೆಂದೂ ಪರರ ಕ್ಷಮಿಸಬಲ್ಲೆ ..
ಜೀವನದ ತುದಿಗೇರಿ ಬಂದ ನೀನು ನಿಜಕ್ಕೂ ಪ್ರಭುದ್ದ . . .
ನೀ ನಿಜಕ್ಕೂ ವಾಸ್ತವತೆಗೆ ಪ್ರತೀಕ ..

- ಅಮರ್ ಕಾನುಗೋಡು ಗಣಪತಿ