Thursday, December 9, 2010

ನಿಜ ಜೀವನ ತುದಿಗೇರಿ ಬಂದು . .



ಹಸ್ತಾವಲಾಘನ ಆತ್ಮಾವಲಾಘನ ಎರಡರ ವ್ಯತ್ಯಾಸ ತಿಳಿದೊಡೆ
ನೀನಿರುವೆ ಮಾರ್ಮಿಕಥೆಯ ಹಾದಿಯಲಿ ...
ನೀ ತಿಳಿಯುವೆ ,
ಪ್ರೀತಿ ಕೇವಲ ಲೀನವಾಗುವಿಕೆಯಲ್ಲ ..
ಒಂದೆಡೆ ಸೇರುವಿಕೆ ಕೇವಲ ರಕ್ಷಣೆಗಾಗಲ್ಲ . . .
ನೀನಿಡುವ ಮಧುರ ಚುಂಬನ ಕೇವಲ ಗುರುತಿಗಲ್ಲ ..
ನೀಕೊಡುವ ಆ ಅಂಗಚಿತ್ತ ಕೇವಲ ಒಡಂಬಡಿಕೆಯಲ್ಲ ..
ನೀ ತಲೆ ಎತ್ತಿ ಕಣ್ಬಿಟ್ಟು ಒಪ್ಪಿದ ನಿನ್ನ ತಪ್ಪುಗಳು ಕೇವಲ ಉದ್ವಿಘ್ನತೆಯ ಮಗುವಿನ ತಾರಕವಲ್ಲ...
ಅನಿಶ್ಚಿತತೆಯ ನಾಳೆಯ ಹಸಿರಂಗಳಕ್ಕೆ ನೀ ನಿಂದು ಹುಡುಕಿದ ಹಾದಿಯಲ್ಲಿ
ಸೂರ್ಯೋದಯದ ಬೆಳಗೂ ಕೆಲವೊಮ್ಮೆ ಸುಡುವಂತೆ ಭಾಸವೋ .. ..
ನಿನ್ನಾತ್ಮವ ಶೃಂಗರಿಸಿ , ಬೇರೊಬ್ಬರು ಹೂವು ಕೊಡುವ ಮುನ್ನ , ಉದ್ಯಾನ್ನವ ಚಿಗುರೊಡೆಸು ..
ನೀ ನಿನ್ನ ನಂಬು .. ನಿನ್ನ ಒಳ್ಳೆಯತನವ ಚಿಮ್ಮು ...
ಕಾರಣ ನೀನೆಂದೂ ಪರರ ಕ್ಷಮಿಸಬಲ್ಲೆ ..
ಜೀವನದ ತುದಿಗೇರಿ ಬಂದ ನೀನು ನಿಜಕ್ಕೂ ಪ್ರಭುದ್ದ . . .
ನೀ ನಿಜಕ್ಕೂ ವಾಸ್ತವತೆಗೆ ಪ್ರತೀಕ ..

- ಅಮರ್ ಕಾನುಗೋಡು ಗಣಪತಿ

Saturday, March 6, 2010

ಜೀವನ ಪಯಣ


ಸಂತಸವು ಸದಾ ತುಂಬಿಂಪು . . .
ಹೃದಯ ಹಾಡಿತು .. ಪಾದ ನರ್ತಿಸಿತ್ತು ...
ಮನಸ್ಸೇ ಗಾಳಿಯಲ್ಲಿ ತೇಲಾಡಿತು ..
ಪ್ರಪಂಚ ಹಗುರಾಗಿ ಮೇಲು ಗಾಳಿಗೆ ತೂರಾಡಿತು ...
ಸಂತಸದ ತಾಳಕ್ಕೆ ಈ ಭೂಮಿ ಗೆಜ್ಜೆಯ ಮೀಟಿತು ...
ಆ ನೀರ ತುದಿಗೆ ಆಗಸ ಚುಂಬಿಸಿತು ..
ಕೊಗಿಲೆಯೇನೋ ಮೈ ಮರೆಯಿತು ..
ಪದಗಳ ಕಾಣದ ಕೊಳಲು ಪದಗುಂಜಕೆ ಕಸಿವಿಸಿಯಿಟ್ಟಿತು ..
ಸಂತಸವು ಸದಾ ತುಂಬಿಂಪು !!

- ಅಮರ ಕಾನುಗೋಡು ಗಣಪತಿ